ದೊಡ್ಮನೆ ಹುಡ್ಗ ೨೦೧೬ ರ ಕನ್ನಡ ಭಾಷೆಯ ಆಕ್ಷನ್ ಡ್ರಾಮಾ ಚಲನಚಿತ್ರವಾಗಿದ್ದು, ದುನಿಯಾ ಸೂರಿ ನಿರ್ದೇಶಿಸಿದ್ದಾರೆ, ಇದರಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ರಾಧಿಕಾ ಪಂಡಿತ್ ಇದ್ದಾರೆ. ಚಿತ್ರದಲ್ಲಿ ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ಕೃಷ್ಣ, ಶ್ರೀನಿವಾಸ ಮೂರ್ತಿ ಮತ್ತು ಪಿ. ರವಿ ಶಂಕರ್ ಅವರ ತಾರಾಗಣವಿದೆ, ಜೊತೆಗೆ ಶಿವ ರಾಜಕುಮಾರ್ ಧ್ವನಿ ನೀಡಿದ್ದಾರೆ. ಈ ಚಿತ್ರವು ಪುನೀತ್ ರಾಜ್ ಕುಮಾರ್ ಅವರ 25 ನೇ ಚಿತ್ರವಾಗಿದೆ. ಈ ಚಿತ್ರವು ಪುನೀತ್ ಮತ್ತು ಸೂರಿ ನಡುವಿನ ಮೂರನೇ ಸಹಯೋಗವನ್ನು ಸೂಚಿಸುತ್ತದೆ. ಅಜಯ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಂ.ಗೋವಿಂದು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಶಶಿಧರ್ ಅಡಪ ಕಲಾ ನಿರ್ದೇಶನ ಮಾಡಿದ್ದಾರೆ . ಇದರ ಚಿತ್ರೀಕರಣವು ೫ ಮಾರ್ಚ್ ೨೦೧೫ ರಂದು ಪ್ರಾರಂಭವಾಯಿತು. ಈ ಚಲನಚಿತ್ರವು ೩೦ ಸೆಪ್ಟೆಂಬರ್ ೨೦೧೬ ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು. == ಕಥಾವಸ್ತು == ಸೂರ್ಯ ಒಬ್ಬ ಯುವಕ, ಅವನು ಸ್ಥಳೀಯ ಮಾರುಕಟ್ಟೆಯಲ್ಲಿ ಬಿರಿಯಾನಿ ಅಡುಗೆ ಮಾಡುತ್ತಾನೆ. ಅವನು ಉಷಾಳನ್ನು ಭೇಟಿಯಾಗುತ್ತಾನೆ, ಅಲ್ಲಿ ಅವನು ಅವಳನ್ನು ಗೂಂಡಾಗಳಿಂದ ರಕ್ಷಿಸುತ್ತಾನೆ ಮತ್ತು ಅವಳನ್ನು ಡ್ರಾಮಾ ಸ್ಟುಡಿಯೊಗೆ ಬಿಡುತ್ತಾನೆ, ಅಲ್ಲಿ ಉಷಾ ನಾಟಕದಲ್ಲಿ ಭಾಗವಹಿಸುತ್ತಿರುವ ನಿಶಾ ಎಂದು ತಿಳಿದುಬಂದಿದೆ. 'ಕೇಬಲ್' ಬಾಬು ರಾಜಕಾರಣಿಯಾಗಬೇಕು ಎನ್ನುವ ಗೂಂಡಾ. ಆತನ ಗೂಂಡಾಗಳು ಅಂಗಡಿಗೆ ಬೆಂಕಿ ಹಚ್ಚುತ್ತಿದ್ದಾಗ ಅವರೆಲ್ಲರನ್ನೂ ದೊಡ್ಡಮನೆ ರಾಜೀವ ಥಳಿಸಿದ್ದರು. ಅವರ ಮಗ ಕೃಷ್ಣ ಕೆಲವು ಆಭರಣಗಳನ್ನು ದೋಚಿದಾಗ, ರಾಜೀವ ಅವನನ್ನು ಅವಮಾನಿಸುತ್ತಾನೆ. ರಾಜೀವನನ್ನು ಅವಮಾನಿಸಲು ಕೃಷ್ಣ ಬಾಬು ಜೊತೆ ಕೈ ಜೋಡಿಸುತ್ತಾನೆ. ಅದರ ನಂತರ, ಬಾಬು ರೈತರಿಗೆ ಸೇರಿದ ಜಮೀನು ದಾಖಲೆಗಳನ್ನು ಕದಿಯುತ್ತಾನೆ. ಇದು ರಾಜೀವನ ಬಂಧನಕ್ಕೆ ಕಾರಣವಾಗುತ್ತದೆ. ಸೂರ್ಯನ ತಂದೆ ಮಲ್ಲಣ್ಣ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲ್ಲಣ್ಣನನ್ನು ಉಳಿಸಲು ಹಣದ ಅವಶ್ಯಕತೆಯಿರುವುದರಿಂದ, ಸೂರ್ಯ ರಾಜೀವನನ್ನು ಕೊಲ್ಲುವ ಕೆಲಸವನ್ನು ತೆಗೆದುಕೊಳ್ಳುತ್ತಾನೆ ಮತ್ತು ರಾಜೀವನನ್ನು ಕೊಲ್ಲಲು ಜೈಲಿಗೆ ಹೋಗುತ್ತಾನೆ. ಆದಾಗ್ಯೂ, ಸೂರ್ಯ ರಾಜೀವನನ್ನು ಕೊಲ್ಲಲು ಹೊರಟಿದ್ದ ಖೈದಿಯೊಂದಿಗೆ ಹೋರಾಡುತ್ತಾನೆ. ಅಲ್ಲಿ ಸೂರ್ಯ ರಾಜೀವನ ಕಳೆದುಹೋದ ಮಗ ಎಂದು ತಿಳಿದು ಬರುತ್ತದೆ. ಆದರೆ ಸೂರ್ಯ ಅವನನ್ನು ದ್ವೇಷಿಸುತ್ತಾನೆ ಮತ್ತು ಬಾಲ್ಯದಲ್ಲಿ ಅವನ ತಂದೆ ತನ್ನ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ನಿಶಾಗೆ ಬಹಿರಂಗಪಡಿಸುತ್ತಾನೆ. ಸೂರ್ಯ ತನ್ನ ಕುಟುಂಬದ ಉಳಿದವರೊಂದಿಗೆ ರಾಜಿ ಮಾಡಿಕೊಂಡು ಮನೆಗೆ ಹಿಂದಿರುಗುತ್ತಾನೆ. ಸೂರ್ಯ ಮತ್ತು ಕೇಬಲ್ ಬಾಬು ನಡುವಿನ ಘರ್ಷಣೆಗಳ ನಂತರ, ಕೃಷ್ಣನು ತನ್ನ ದುಷ್ಕೃತ್ಯಗಳಿಗಾಗಿ ಕ್ಷಮೆಯಾಚಿಸುತ್ತಾನೆ ಮತ್ತು ಕೇಬಲ್ ಬಾಬುನ ಸಹೋದರ ಮಂಜನನ್ನು ಕೊಲ್ಲುತ್ತಾನೆ. ರಾಜೀವ ತನ್ನ ಸಹೋದರಿಗೆ ತಾನು ಯಾವಾಗಲೂ ಕೃಷ್ಣನನ್ನು ಕಾಳಜಿ ವಹಿಸುತ್ತೇನೆ ಎಂದು ಭರವಸೆ ನೀಡಿದ್ದರಿಂದ ಅವನು ಸೂರ್ಯನನ್ನು ಕಾಳಜಿ ವಹಿಸಲಿಲ್ಲ ಎಂದು ಬಹಿರಂಗಪಡಿಸುತ್ತಾನೆ. ಕೇಬಲ್ ಬಾಬು ರಾಜೀವನಿಗೆ ಚಾಕುವಿನಿಂದ ಇರಿಯುತ್ತಾನೆ. ಸೂರ್ಯ ಬಾಬುವನ್ನು ಥಳಿಸಿ ಸುರಂಗದಲ್ಲಿ ಎಸೆಯುತ್ತಾನೆ, ಅಲ್ಲಿ ಬಾಬುವಿನ ಸಹಾಯಕನು ಬಾಬುನನ್ನು ಜೀವಂತವಾಗಿ ಹೂತುಹಾಕುವ ಮೂಲಕ ಕೊಲ್ಲುತ್ತಾನೆ. ಸೂರ್ಯ ದಾಖಲೆಗಳನ್ನು ತರುತ್ತಾನೆ ಮತ್ತು ರಾಜೀವ ಚೇತರಿಸಿಕೊಳ್ಳುತ್ತಾನೆ, ಅಲ್ಲಿ ಅವನು ರೈತರಿಗೆ ದಾಖಲೆಗಳನ್ನು ವಿತರಿಸುತ್ತಾನೆ. ರೈತರು ತಮ್ಮ ತಪ್ಪನ್ನು ಅರಿತು ರಾಜೀವನಲ್ಲಿ ಕ್ಷಮೆ ಕೇಳುತ್ತಾರೆ. ಕುಟುಂಬ ಸಮೇತರಾಗಿ ಎಲ್ಲರೂ ತಮ್ಮ ಹಳ್ಳಿ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. == ತಾರಾಗಣ == ಪುನೀತ್ ರಾಜ್‍ಕುಮಾರ್ ರಾಧಿಕಾ ಪಂಡಿತ್ ಅಂಬರೀಶ್ ಸುಮಲತಾ ಭಾರತಿ ಡಾರ್ಲಿಂಗ್ ಕೃಷ್ಣ ಪಿ.ರವಿ ಶಂಕರ್ ಶ್ರೀನಿವಾಸ ಮೂರ್ತಿ ರಂಗಾಯಣ ರಘು ಚಿಕ್ಕಣ್ಣ ಅವಿನಾಶ್ ಎಚ್. ಜಿ. ದತ್ತಾತ್ರೇಯ ಹೊನ್ನವಳ್ಳಿ ಕೃಷ್ಣ ಸತ್ಯಜಿತ್ == ನಿರ್ಮಾಣ == === ಬೆಳವಣಿಗೆ === ಫೆಬ್ರವರಿ ೨೦೧೪ ರಲ್ಲಿ, ಸೂರಿ ಮತ್ತು ಪುನೀತ್ ರಾಜ್‌ಕುಮಾರ್ ಮತ್ತೆ ಅಜಯ್ ಪಿಕ್ಚರ್ಸ್ ಅಡಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ವರದಿಯಾಗಿತ್ತು. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ವಿ.ಹರಿಕೃಷ್ಣ ಆಯ್ಕೆಯಾಗಿದ್ದರು. ೨೪ ಏಪ್ರಿಲ್ ೨೦೧೪ ರಂದು ಬೆಂಗಳೂರಿನ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಲಾಯಿತು. ಚಿತ್ರಕ್ಕೆ ಕಲಾ ನಿರ್ದೇಶನ ನಿರ್ವಹಿಸಲು ಕಲಾ ನಿರ್ದೇಶಕ ಶಶಿಧರ್ ಅಡಪ ಆಯ್ಕೆಯಾದರು. ಚಿತ್ರದ ಛಾಯಾಗ್ರಹಣವನ್ನು ನಿರ್ವಹಿಸಲು ಸತ್ಯ ಹೆಗಡೆ ಆಯ್ಕೆಯಾಗಿದ್ದರು. === ನಟ-ನಟಿಯರ ಆಯ್ಕೆ === ಜುಲೈ 2014 ರಲ್ಲಿ, ರಮ್ಯಾ ಚಿತ್ರದ ನಾಯಕಿಯಾಗಿ ನಟಿಸುತ್ತಾರೆ ಎಂದು ವರದಿಯಾಗಿತ್ತು, ಆದರೆ ನಂತರ ಅವರು "ಸಂಭಾವನೆ ಸಮಸ್ಯೆ" ಯನ್ನು ಉಲ್ಲೇಖಿಸಿ ಚಿತ್ರದಿಂದ ಹೊರನಡೆದರು. ರಮ್ಯಾ ಅವರ ನಿರ್ಗಮನದ ನಂತರ ರಾಧಿಕಾ ಪಂಡಿತ್ ಅವರು ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಎರಡನೇ ಸಹಯೋಗವಾಗಿ ನಾಯಕಿಯ ಪಾತ್ರವನ್ನು ವಹಿಸಿಕೊಂಡರು. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪೋಷಕರ ಪಾತ್ರವನ್ನು ಚಿತ್ರಿಸಲು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಸಹಿ ಹಾಕಿದರು. ಚಿತ್ರದಲ್ಲಿ ಅಂಬರೀಶ್ ಅವರ ಸಹೋದರಿಯ ಪಾತ್ರಕ್ಕೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಆಯ್ಕೆಯಾದರು. ಬಿಗ್‌ಬಾಸ್ ೨ ಖ್ಯಾತಿಯ ಸಂತೋಷ್ ಆರ್ಯವರ್ದನ್ ಅವರೊಂದಿಗೆ ಶ್ರೀನಿವಾಸ ಮೂರ್ತಿ, ಚಿಕ್ಕಣ್ಣ, ರಂಗಾಯಣ ರಘು, ಪಿ.ರವಿಶಂಕರ್, ಅವಿನಾಶ್ ಮತ್ತು ಉದಯ ರಾಘವ್ ಅವರನ್ನು ಪ್ರಮುಖ ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಲಾಯಿತು. === ಚಿತ್ರೀಕರಣ === ಪ್ರಧಾನ ಛಾಯಾಗ್ರಹಣವು 5 ಮಾರ್ಚ್ 2015 ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಗಣೇಶನ ದೇವಸ್ಥಾನದಲ್ಲಿ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜ್‌ಕುಮಾರ್, ನಟರಾದ ವಿ.ರವಿಚಂದ್ರನ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶ್ರೀನಿವಾಸ ಮೂರ್ತಿ, ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್, ವಿನಯ್ ರಾಜ್‌ಕುಮಾರ್, ಇಮ್ರಾನ್ ಸರ್ದಾರಿಯಾ ಸೇರಿದಂತೆ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು. == ಧ್ವನಿಮುದ್ರಿಕೆ == ಚಿತ್ರಕ್ಕೆ ಹಾಡು ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಲು ವಿ.ಹರಿಕೃಷ್ಣ ಸಹಿ ಹಾಕಿದರು. ಚಿತ್ರದ ಹಾಡಿನ ರೆಕಾರ್ಡಿಂಗ್ ೨೪ ಏಪ್ರಿಲ್ ೨೦೧೪ ರಂದು ನಟ ರಾಜಕುಮಾರ್ ಅವರ ಜನ್ಮದಿನದಂದು ಬೆಂಗಳೂರಿನ ಪ್ರಸಾದ್ ಸ್ಟುಡಿಯೋದಲ್ಲಿ ಪ್ರಾರಂಭವಾಯಿತು. ಧ್ವನಿಮುದ್ರಿಕೆಗೆ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ . ಚಿತ್ರದ ಆಲ್ಬಂ ಐದು ಹಾಡುಗಳನ್ನು ಒಳಗೊಂಡಿದೆ. ಮೊದಲ ಹಾಡು "ಅಭಿಮಾನಿಗಳೇ.." ಆಗಸ್ಟ್ 14 ರಂದು ಶಿವಕುಮಾರ ಸ್ವಾಮಿಗಳಿಂದ ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ದೊಡ್ಮನೆ ಹುಡ್ಗ @ ಐ ಎಮ್ ಡಿ ಬಿ